Sunday, October 21, 2012

Congress on the move In Terdal Streets.


ತೇರದಾಳ : ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಆಶ್ರಮದಲ್ಲಿ ಕಾಂಗ್ರೆಸ್ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರ.ಕಾರ್ಯದರ್ಶಿ  ಜಯಸಿಂಹ ಉದ್ಘಾಟಿಸಿದರು.


ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಆಶ್ರಮದಲ್ಲಿ ಕಾಂಗ್ರೆಸ್ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮವನ್ನುದೆಶಿಸಿ ಜಯಸಿಂಹ ಅವರು ಮಾತನಾಡುತ್ತಿರುವರು. 



ಕಾಂಗ್ರೆಸ್ನಲ್ಲಿ ಒಗ್ಗಟ್ಟಿದೆ-ಸರ್ವರ ಪರವಾಗಿದೆ-ಜಯಸಿಂಹ

ತೇರದಾಳ : 127ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಗರೀಬಿ ಹಟಾವೋ, 18 ವರ್ಷದ ಯುವಕರಿಗೆ ಮತದಾನದ ಅವಕಾಶ, ಮಹಿಳೆಯರಿಗೆ ಪ್ರತಿಶತ50ರಷ್ಟು ಉದ್ಯೋಗವಕಾಶ ಹೀಗೆ ಪ್ರಮುಖ 20ಅಂಶಗಳ ಕಾರ್ಯಕ್ರಮ ಜಾರಿ ಮಾಡಿ ಸರ್ವರ ಪರವಾದ ಪಕ್ಷವಾಗಿದೆಯೆಂದು ಕೆಪಿಸಿಸಿ ಪ್ರ.ಕಾರ್ಯದರ್ಶಿ ಜಯಸಿಂಹ ಹೇಳಿದರು.
ಇಲ್ಲಿಯ ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಆಶ್ರಮದಲ್ಲಿ ಕಾಂಗ್ರೆಸ್ಗೆ ಬನ್ನಿ, ಬದಲಾವಣೆ ತನ್ನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ, ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಭಾಷೆ, ಧರ್ಮ ಬೇರೆಯಿದ್ದರೂ ಎಲ್ಲರೂ ಒಂದೆಂಬ ಭಾವವಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಂತ್ರದೊಂದಿಗೆ ಬೆಳೆದ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಮತದಾರರು ಗೆಲ್ಲಿಸಲು ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಮಲ್ಲಪ್ಪಣ್ಣ ದಾನಿಗೊಂಡ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಎಸ್.ಜಿ.ನಂಜಯನಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ, ಹಿರಯರಾದ ಬಿ.ಎ.ದೇಸಾಯಿ, ಭೀಮಪ್ಪಣ್ಣ ರೆಡ್ಡಿ, ಉಮಾಶ್ರೀ, ಡಾ.ಮಹಾವೀರ ಎಸ್.ದಾನಿಗೊಂಡ, ಡಾ.ಪಿ.ಆರ್.ಅವರಾದಿ, ಡಾ.ಎ.ಆರ್.ಬೆಳಗಲಿ, ಶಂಕರ ಸೋರಗಾಂವಿ, ದೇವಲಸರಕಾರ ದೇಸಾಯಿ, ಮುತ್ತಣ್ಣ ಹಿಪ್ಪರಗಿ, ತಾಲೂಕಾ ಎಪಿಎಂಸಿ ನಿದರ್ೇಶಕ ಪ್ರವೀಣ ನಾಡಗೌಡ, ತಾ.ಪಂ.ಮಾಜಿ ಸದಸ್ಯ ಈರಪ್ಪ ಮಳ್ಳಣ್ಣವರ, ನೇಮಣ್ಣ ಸಾವಂತನವರ, ಅಶೋಕ ಉಳ್ಳಾಗಡ್ಡಿ, ಹರೀಷ ಕುಲಕಣರ್ಿ, ಗೋವಿಂದ ವಾಜಂತ್ರಿ, ಮಾಜಿ ಕ್ಯಾ. ತುಕಾರಾಮ್ ರೋಡಕರ, ನೀಲೇಶ ದೇಸಾಯಿ, ತುಳಜಪ್ಪ ದೇಸ್ತೋಟ, ಪಾಸ್ನರ್ಾಲ ಜೈನ್, ಸಂಗಪ್ಪ ಹಲ್ಲಿ ಇನ್ನಿತರರು ಇದ್ದರು. 
ಪಕ್ಷದ ಮುಖಂಡರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸ್ನೇಹಲ್ ಪುನಹಳ್ಳಿ ವಂದೇ ಮಾತರಂಗೀತೆ ಹಾಡಿದರು. ಶಿವಪ್ಪ ಖವಾಸಿ ಸ್ವಾಗತಿಸಿದರು. ಬಸವರಾಜ ಗಾತಾಡೆ ನಿರೂಪಿಸಿದರು ವಂದಿಸಿದರು. 
ಆರಂಭದಲ್ಲಿ ಅಂಬೇಡ್ಕರ್ ಸರ್ಕಲ್ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ನಂತರ ಬ್ರಹ್ಮಾನಂದ ಆಶ್ರಮಕ್ಕೆ ಆಗಮಿಸಿದರು.


ಶ್ರೀ ಬಿ.ಡಿ.ಹಿರೆಮೇತ್ರಿ.



No comments:

Post a Comment

Test

Test 1