Friday, October 29, 2010

Dasara Specials

Terdal Dasara Dandia At Siddeshwar Galli 









Shri Venkatramana Ratha In Terdal Streets









Voleyball Competion held at Shri Prabhuling P. U. College. Terdal








Devi Pooja at Bogar Basti, Terdal.
















Thursday, October 14, 2010

Durga Devi at Kallatti

Terdal 14-10-2010

Durga Devi
ತೇರದಾಳದ ಕಲ್ಲಟ್ಟಿಯಲ್ಲಿ ನಾಡಹಬ್ಬ ದಸರಾ. ನವರಾತ್ರಿ ನಿಮಿತ್ಯ ಶ್ರೀಆದಿಶಕ್ತಿ ತರುಣ ಮಂಡಳಿಯವರು ಕಾಮಣ್ಣನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ನಾಡದೇವಿ ಶ್ರೀಆದಿಶಕ್ತಿಯ ಮೂರ್ತಿ ಆಕರ್ಷಕವಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಸಮಾರಂಭ ನಡೆಯುವದು. ಸದ್ಭಕ್ತರು ಶ್ರೀದೇವಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಧಾರ್ಮಿಕ ಪ್ರಜ್ಞೆ. ಸತ್ಸಂಗದ ಮಹತ್ವ ಅರಿಯಲು ಕರೆ

Terdal 10-10-2010

ತೇರದಾಳ.೧೦-ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಪ್ರಜ್ಞೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ತರುಣ ಮಂಡಳಿ ಕಳೆದ ೧೩ವರ್ಷಗಳಿಂದ ಆದಿಶಕ್ತಿಯ ಮೂರ್ತಿ ಪ್ರತಿಷ್ಠಾಪಿಸಿ ಜನಜಾಗೃತಿ ಕಾರ್ಯಕ್ರಮ ಸಂಘಟಿಸುತ್ತಿರುವದು ಶ್ಲಾಘಾನೀಯವೆಂದು ವಲಯ ಕಸಾಪ ಅಧ್ಯಕ್ಷ ಮ, ಕೃ. ಮೇಗಾಡಿ ಹೇಳಿದರು.

ಇಲ್ಲಿಯ ಕಲ್ಲಟ್ಟಿಯ ಶ್ರೀಆದಿಶಕ್ತಿ ತರುಣ ಮಂಡಳಿಯವರು ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಆದಿಶಕ್ತಿಯ ದಿವ್ಯಪ್ರಭಾವದಿಂದ ನಾಡು ಸುಖ-ಶಾಂತಿ-ನೆಮ್ಮದಿ ಕಾಣಲೆಂದು ಹಾರೈಸಿದರು.
ಹಿರಿಯರಾದ ರುದ್ರಪ್ಪಣ್ಣ ವಂಟಗುಡಿ ಅಧ್ಯಕ್ಷತೆ ವಹಿಸಿದ್ದರು.

ಆದಿಶಕ್ತಿಯ ಪುರಾಣ ಪ್ರವಚಣವನ್ನು ಬುರ್ಲಟ್ಟಿಯ ಶಿವಶಂಕರ ಬಡಿಗೇರ ಶರಣರು ನಡೆಸಿಕೊಟ್ಟು ಬದುಕು ಹಸನಾಗಲು ಸನ್ಮಾರ್ಗದತ್ತ ನಡಿಗೆ ಇರಬೇಕೆಂದರು.
ರಾಮಣ್ಣ ಹೊಸಮನಿ. ಪ್ರಭುರಾಯ ಬಜಂತ್ರಿ. ಪಾಂಡು ಹುದ್ದಾರ. ನಾಗರಾಜ ಮುದಕನ್ನವರ. ಅಪ್ಪಾಸಿ ಹೊಸಮನಿ. ಉಮ್ಮಣ್ಣ ರಾವಳ. ಅಲ್ಲಪ್ಪ ಖವಾಸಿ ಉಪಸ್ಥಿತರಿದ್ದರು.
ನಿರಂಜನ ಬಡಿಗೇರ. ಸತ್ಯಪ್ಪ ದಾಸರ ಪ್ರಾರ್ಥಿಸಿದರು. ಅಲ್ಲಪ್ಪ ಇಂಗಳಗಿ ಸ್ವಾಗತಿಸಿದರು. ಸಿದ್ದು ಅಥಣಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಯ್ಯ ಬೃಂಗಿ ಮಂಗಲ ಗೀತೆ ಹಾಡಿದರು.

Tuesday, October 12, 2010

ಕಣ್ಮರೆಯಾದ ಮಗನಿಗಾಗಿ ಹೆತ್ತವರ ಹುಡುಕಾಟ;

Terdal : 08-10-2010



ತೇರದಾಳ. ೮-ಸ್ಠಳೀಯ್ ಪೋಲೀಸ್ ಠಾಣೆ ವ್ಯಾಪ್ತಿಗೆ ಬರುವ ರಬಕವಿಯ ಸಾಗರ ಮಹಾಲಿಂಗಪ್ಪ ಮುತ್ತೂರ (೨೩) ಎಂಬ ಯುವಕ ಆಗಸ್ಟ್ ೧೪ರಿಂದ ಕಾಣೆಯಾಗಿದ್ದಾನೆಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ಇಂದು ದಾಖಲಾಗಿದೆ.

ಬೆಳಗಾವಿ ಕೆ.ಎಲ್.ಇ ಕಾಲೇಜಿನಲ್ಲಿ ಬಿ.ಇ.ಸಿವಿಲ್ ವ್ಯಾಸಂಗ ಮಾಡುತ್ತಿದ್ದ ಸಾಗರ ಮಾನಸಿಕವಾಗಿ ಅಸ್ವಸ್ಥನಲ್ಲ. ಆರೋಗ್ಯಪೂರ್ಣನೂ ಆಗಿದ್ದಾನೆ. ಆದರೆ ಆತ ಮನೆಯಿಂದ ಯಾವ ಉದ್ದೇಶಕ್ಕಾಗಿ ಹೋದ ಎಂಬುದು ತಿಳಿದಿಲ್ಲವೆಂದು ಮನೆಯವರು ಹೇಳುತ್ತಿದ್ದಾರೆ. ಎಲ್ಲ ಕಡೆಗೆ ಹುಡುಕಾಡಿದರೂ ಸಿಗದಿದ್ದಾಗ, ಸಾಗರನ ಪಾಲಕರು ಇದೀಗ ಪೋಲೀಸರ ಮೊರೆ ಹೋಗಿದ್ದಾರೆ.

ಮನೆ ಬಿಟ್ಟು ಹೋಗುವಾಗ ಕರಿ ಬಣ್ಣದ ಪ್ಯಾಂಟ್. ಬಿಳಿ ಅಂಗಿ ಧರಿಸಿದ್ದನು. ೫ಫೂ,೧೦ಇಂ, ಎತ್ತರ, ಕನ್ನಡ, ಹಿಂದಿ. ಇಂಗ್ಲೀಷ ಮಾತನಾಡಬಲ್ಲ. ತೆಳ್ಳಗಿನ ಮೈಕಟ್ಟು ಹೊಂದಿರುವ ಈತ ಗೋದಿಗೆಂಪು ಬಣ್ಣ ಹೊಂದಿದ್ದಾನೆ, ಈತನ ಸುಳಿವು ಸಿಕ್ಕವರು ಕೊಡಲೇ (೦೮೩೫೩) ೨೫೫೧೩೩ಗೆ ಇಲ್ಲವೆ, ಆರ್, ಆರ್, ಪಾಟೀಲ ಠಾಣಾಧಿಕಾರಿ ೯೪೮೦೮೦೩೯೫೯ಗೆ ಸಂಪರ್ಕಿಸಲು ಪೋಲಿಸರು ಕೋರಿದ್ದಾರೆ.

Saturday, October 9, 2010

ಸಂಭ್ರಮದ ದಸರಾ ಪ್ರಯುಕ್ತ ಆದಿಶಕ್ತಿ ಮೆರವಣಿಗೆ

Terdal


photo will be uploaded later "sorry for the inconvenience"


ತೇರದಾಳ ಕಲ್ಲಟ್ಟಿಯ ಆದಿಶಕ್ತಿ ತರುಣ ಮಂಡಳಿಯವರು ನಾಡಹಬ್ಬ ದಸರಾ ಪ್ರಯುಕ್ತ ಶುಕ್ರವಾರ ನಾಡದೇವಿ ಆದಿಶಕ್ತಿಯ ಭವ್ಯ ಮೆರವಣಿಗೆಯನ್ನು ಪಟ್ಟಣದಲ್ಲಿ ಹಮ್ಮಿಕೊಂಡಿದ್ದರು.

Friday, October 8, 2010

sanskrit sambhashanam 1 Parichaya



Terdal

Adhikara Hastantara

Terdal 06-10-2010
ಅಧಿಕಾರ ಹಸ್ತಾಂತರ;

ಕಳೆದ ಐದು ವರ್ಷಗಳಿಂದ ತೇರದಾಳ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಪಿ, ಎಮ್, ಪತ್ತಾರ ಅವರು ಇಂದು ಬುಧವಾರ ಮಧ್ಯಾನ್ಹ ನೂತನ ಸಿಆರ್ ಪಿ ಆರ್.ಟಿ ಪೋತದಾರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಿಂದೆ ತೇರದಾಳ ವಲಯದ ಎಲ್ಲ ಶಿಕ್ಷಕ/ಕಿಯರು ಸಹಕಾರ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಪಿ. ಎಮ್, ಪತ್ತಾರ ಅರ್ಪಿಸಿದರು. ಸರಕಾರಿ ಕನ್ನಡ ಮಾದರಿ ಶಾಲೆ ಮುಖ್ಯೋಪಾದ್ಯಾಯನಿಯರು ಪಾಲ್ಗೊಂಡಿದ್ದರು. ಜಿ.ಎಮ್.ಮೋಪಗಾರ ವಂದಿಸಿದರು.

ತುಳಜಾಭವಾನಿ ಮೂರ್ತಿ ಪ್ರತಿಷ್ಠಾಪನೆ ೧೦ ರಂದು

Terdal 06-10-2010

ತೇರದಾಳ,೬- ಪಟ್ಟಣದಲ್ಲಿ ಶ್ರೀತುಳಜಾಭವಾನಿ ಮೂರ್ತಿ ಪ್ರತಿಷ್ಠಾಪನೆಗೆ ಗಣಪತಿ ಗಲ್ಲಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆಯೆಂದು ಸಂಘಟಕರು, ಹಿರಿಯರು ತಿಳಿಸಿದ್ದಾರೆ.
ರವಿವಾರ ದಿ. ೧೦ರಂದು ಸಾಯಂಕಾಲ ೪ಗಂಟೆಗೆ ನೂತನ ಶ್ರೀತುಳಜಾಭವಾನಿ ಮೂರ್ತಿ ಮೆರವಣಿಗೆಯು ದತ್ತ ಮಂಗಲ ಕಾರ್ಯಾಲಯದಿಂದ ಆರಂಭಗೊಂಳ್ಳುವುದು. ಮಾತೆಯರು ಕುಂಭ ಆರತಿಯೊಂದಿಗೆ ಪಾಲ್ಗೊಂಡರೆ, ಸಕಲ ವಾದ್ಯವೃಂದದ ಕಲಾವಿದರು, ಪಟ್ಟಣದ ಗಣ್ಯಮಾನ್ಯರು, ಹಿರಿಯರು, ಸದ್ಬಕ್ತರು ಭಾಗವಹಿಸಲಿದ್ದಾರೆ.
ಸೋಮವಾರ ದಿ.೧೦ರಂದು ಮುಂಜಾನೆ ೮-೩೦ಕ್ಕೆ ಜಮಖಂಡಿ ಮುತ್ತಿನಕಂತಿಮಠದ ಶ್ರೀಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮೂರ್ತಿ ಪ್ರತಿಷ್ಠಾಪಿಸುವರು.
ನಂತರ ೧೧ಗಂಟೆಗೆ ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಸ್ವಾಮಿಗಳ ಸಾನಿಧ್ಯದಲ್ಲಿ ಸಮಾರಂಭ ಜರುಗುವದು. ಶೇಗುಣಸಿ ವಿರಕ್ತಮಠದ ಉತ್ತರಾಧಿಕಾರಿ ಶ್ರೀಮಹಾಂತ ದೇವರು ನೇತ್ರತ್ವದಲ್ಲಿ ಸ್ಥಳೀಯ ಶಾಸಕ ಸಿದ್ದು ಸವದಿ ಸಮಾರಂಭ ಉದ್ಘಾಟಿಸುವರು. ಪುರಸಭೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸುವರು. ಸಕಲ್ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ, ಧನದಿಂದ ಸೇವೆಗೈಯಲು ಸಂಘಟಕರು ಕೋರಿದ್ದಾರೆ.

Thursday, October 7, 2010

Terdal New Button added

Terdal 07-10-2010


There is a new button added in this blog called 'Jobs' beside 'Home' button.

So please check and recommend any job related matters.


 
With regards
Manoj Yadwad

Wednesday, October 6, 2010

Deshiya kleyannu ulisi belesalu Umashri Kare

ದೇಶೀಯ ಕಲೆಗಳನ್ನು ಉಳಿಸಿ ಬೆಳೆಸಲು ಉಮಾಶ್ರೀ ಕರೆ



ತೇರದಾಳ ಸಮೀಪದ ನಾವಲಗಿ ಗ್ರಾಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬಿಜಾಪುರ ಜಿಲ್ಲಾ ಭೂಮಿ ಬಳಗ, ತೇರದಾಳದ ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರೆಡು ದಿನಗಳ ಶ್ರೀಕೃಷ್ಣ ಪಾರಿಜಾತ ಭಾಗವತರ ಸಮಾವೇಶದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಚಿತ್ರನಟಿ ಉಮಾಶ್ರೀ ಮಾತನಾಡಿದರು. ನಾಗರಾಳದ ನಿಂಗಪ್ಪಯ್ಯ ಶ್ರೀ, ಬೀಳಗಿ ಶಿವಾನಂದ ಶೈಲ ಶ್ರೀ,ಡಾ.ಬಾಳಾಸಾಹೇಬ ಲೋಕಾಪುರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಹನಮಂತ ಬರಗಾಲ ಚಿತ್ರದಲ್ಲಿದ್ದಾರೆ.

ಬನಹಟ್ಟಿ,೩-ಮನುಷ್ಯನ ಮನಸ್ಸಿಗೆ ಅಹ್ಲಾದನ್ನುಂಟು ಮಾಡುವಂತಹವು ಜನಪದ ಕಲೆಗಳು. ಉತ್ತರ ಕರ್ನಾಟಕದಲ್ಲಿ ಇಂದಿಗೂ ಜನಪದ ಕಲೆಗಳು ಜೀವಂತವಾಗಿವೆ. ಆದರೆ ಇಂದಿನ ಯುವಕರು ಆಧುನಿಕ ಸಂಗೀತಕ್ಕೆ ಒಗ್ಗಿರುವದು ಶೋಚನೀಯ. ಆಧುನಿಕ ತಲೆಮಾರಿನ ಕಲಾವಿದರು ದೇಶೀಯ ಕಲೆಗಳನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದು ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಕಲಾವಿದೆ ಉಮಾಶ್ರೀ ಕರೆ ನೀಡಿದರು.

ಇಲ್ಲಿಗೆ ಸಮೀಪದ ನಾವಲಗಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಭಾಗವತ ಕಲಾವಿದ ದಿ.ಕಲ್ಲಪ್ಪ ಪಟ್ಟಣಶೆಟ್ಟಿ ಸ್ಮರಣಾರ್ಥವಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಜಾಪುರ ಜಿಲ್ಲಾ ಭೂಮಿ ಬಳಗ, ತೇರದಾಳದ ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರೆಡು ದಿನಗಳ ಶ್ರೀಕೃಷ್ಣ ಪಾರಿಜಾತ ಭಾಗವತರ ಸಮಾವೇಶದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ನೈಜ ಕಲಾವಿದರು ಕೆಲಸವಿಲ್ಲದೇ ನರಳಿ ಮೂಲೆಗುಂಪಾಗುತ್ತಿದ್ದಾರೆ. ಅವರ ಬದುಕಿಗೆ ನೆಲೆ ಒದಗಿಸಲು ಸರಕಾರ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಪಾರಿಜಾತದ ಭಾಹವತರ ಬಗ್ಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಮಾವೇಶ ನಡೆದಿರುವದು ಸ್ತುತ್ಯವಾಗಿದ್ದು, ವಿದ್ವಾಂಸರು, ಸಂಶೋಧಕರು, ಜನಪ್ರತಿನಿಧಿಗಳು ಹೋರಾಟದ ಮೂಲಕ ಪಾರಿಜಾತ ಅಧ್ಯಯನ ಪೀಠವನ್ನು ನಮ್ಮ ಜಿಲ್ಲೆಯಲ್ಲಿ ಮುಖ್ಯವಾಗಿ ಕಲಾವಿದರಿಂದೊಡಗೂಡಿದ ನಾವಲಗಿ ಗ್ರಾಮದಲ್ಲಿಯೇ ಪಾರಿಜಾತ ಅಧ್ಯಯನ ಪೀಠವನ್ನು ಸ್ಥಾಪಿಸಲು ಇಚ್ಚಾಶಕ್ತಿ ಬೆಳೆಸಿಕೊಳ್ಳುವುದರು ಮೂಲಕ ಈ ಭಾಗದಲ್ಲಿ ಕಲಾವಿದರ ಬಹುದಿನಗಳ ಆಸೆ ಈಡೇರುವಂತಾಗಬೇಕೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು. ಆಶಯ ನುಡಿಗಳನ್ನಾಡಿದ ಅವರು ಶ್ರೀಕೃಷ್ಣ ಪಾರಿಜಾತದಲ್ಲಿ ಭಾಗವತರು ಪಾರಿಜಾತದ ಜೀವಾಳ. ಈ ಪಾರಿಜಾತ ಕಲೆಯನ್ನು ಕಲಾವಿದರು ಕಳೆದ ೨೨೦ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆಂದು ಶ್ಲಾಘಿಸಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ದೃಶ್ಯ ಮಾಧ್ಯಮಗಳ ಹಾವಳಿಯಲ್ಲಿ ದೇಶಿ ಸೊಗಡಿನ ಜನಪದ ಕಲೆಗಳು, ಕಲಾವಿದರು ಉಳಿಯಬೇಕು.ಜನಪದ ವಿಶ್ವವಿದ್ಯಾಲಯ ಜಮಖಂಡಿ ಭಾಗದಲ್ಲಿ ಸ್ಥಾಪನೆಯಾಗಬೇಕೆಂದು ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು,ಕಲಾವಿದರು ಇದಕ್ಕಾಗಿ ಹೋರಾಡುವದೂ ಅಗತ್ಯವೆಂದು ಕರೆಯಿತ್ತರು.
ನಾಗರಾಳ ದಿಗಂಬರೇಶ್ವರಮಠದ ಶ್ರೀ ನಿಂಗಪ್ಪಯ್ಯ ಸ್ವಾಮಿಗಳ ಸಾನಿಧ್ಯದಲ್ಲಿ.ಬೀಳಗಿಯ ಶ್ರೀಶಿವಾನಂದ ಸ್ವಾಮಿಗಳು.ನಾವಲಗಿ ಶ್ರೀಶ್ರೀಶೈಲ ಸ್ವಾಮಿಗಳ ನೇತ್ರತ್ವದಲ್ಲಿ ಮುಗಳಖೋಡದ ಹಿರಿಯ ಭಾಗವತ ಕಲಾವಿದ ಸದಸ್ಯಸ್ವಾಮಿ ಬಬಲಾದಿಮಠ ಉದ್ಘಾಟಿಸಿದರು.
ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ವಿ.ಎಸ್,ಕಟಗಿಹಳ್ಳಿಮಠ, ಜಿ.ಪಂ.ಸದಸ್ಯ ಬಾಬಾಗೌಡ ಪಾಟೀಲ್.ತಾ.ಪಂ.ಸದಸ್ಯ ಹನುಮಂತ ಬರಗಾಲ.ಗ್ರಾ.ಪಂ.ಅಧ್ಯಕ್ಷೆ ರುಕ್ಮವ್ವ ಚನಾಳ. ರೇಖಾ ಕಾಂತಿ. ರವಿ ಡಪಳಾಪರ,ಶ್ರೀಶೈಲ ಪಟ್ಟಣಶೆಟ್ಟಿ ವೇದಿಕೆಯಲ್ಲಿದ್ದರು.
ರುಕ್ಮವ್ವ ಬರಗಾಲ ಸಂಗಡಿಗರ ಚೌಡಕಿಪದದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿವಾನಂದ ಕರಿಗಾರ ಕಾರ್ಯಕ್ರಮ ನಿರೂಪಿಸಿದರು.ವೇದಿಕೆ ಅಧ್ಯಕ್ಷ ಮ.ಕ್ರ.ಮೇಗಾಡಿ ವಂದಿಸಿದರು.

Sunday, October 3, 2010

ರಾಜ್ಯಪಾಲರಿಂದ ಪ್ರಶಸ್ತಿ- ತೇರದಾಳಕ್ಕೆ ಮತ್ತೊಂದು ಗರಿ

ತೇರದಾಳ: 02-10-2010


ತೇರದಾಳದ ಶ್ರೀವಿನಾಯಕ ವಿದ್ಯಾವರ್ಧಕ ಸಂಘದ ಎಮ್.ವಿ.ಪಂಚಾಕ್ಷರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ೨೦೦೭-೦೮ನೇ ಸಾಲಿನ ಎನ್.ಎಸ್.ಎಸ್. ಘಟಕ ಪ್ರಶಸ್ತಿಯನ್ನು ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಚಾರ್ಯ ಎಲ್.ವಿ.ಹಿಡಕಲ್ ಅವರಿಗೆ ಮತ್ತು ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ವಿ.ಬಿ.ಹಳ್ಳೊಳ್ಳಿಯವರಿಗೆ ಸಚಿವ ಡಿ ಸುಧಾಕರ ವಿತರಿಸಿದರು. ಖಾದ್ರಿ ನರಸಿಂಹಯ್ಯ, ಯುವಜನಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರಮಾಳ್, ಡಾ|| ಎಸ್.ರಮಾನಂದ ಶೆಟ್ಟಿ ಚಿತ್ರದಲ್ಲಿದ್ದಾರೆ.

         ಭವಿಷ್ಯದಲ್ಲಿ ತಮ್ಮನ್ನು ಸಮರ್ಪಿಸಿ ಕೊಂಡು ಸಮೂಹ ಬೆಳವಣಿಗೆಯತ್ತ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲು ೧೯೮೯ರಿಂದ ಎನ್.ಎಸ್.ಎಸ್ ಘಟಕಗಳಿಗೆ, ಕಾರ್ಯಕ್ರಮಾಧಿಕಾರಿಗಳಿಗೆ ಸರಕಾರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡುತ್ತಿದೆ. ಇಲ್ಲಿಯ ಪ್ರತಿಷ್ಟಿತ ಶ್ರೀ ವಿನಾಯಕ ವಿದ್ಯಾವರ್ಧಕ ಸಂಘದ ಎಮ್.ವಿ.ಪಂಚಾಕ್ಷರಿ ಕೈಗಾರಿಕಾ ತರಬೇತಿ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆಯ ಕೋಶ ಕೊಡಮಾಡುವ ೨೦೦೭-೦೮ ಸಾಲಿನ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ರಾಜಭವನದಲ್ಲಿ ಈಚೆಗೆ ಪ್ರಧಾನ ಮಾಡಲಾಯಿತು.

         ರಾಜ್ಯಪಾಲ ಹಂಸರಾಜ ಭಾರದ್ವಾಜ ಹಾಗೂ ಯುವಜನ ಸೇವಾ ಹಾಗೂ ಬಂಧೀಖಾನೆ ಸಚಿವ ಡಿ.ಸುಧಾಕರ ಅವರು ಪ್ರಾಚಾರ್ಯ ಎಲ್.ವಿ.ಹಿಡಕಲ್‍ರಿಗೆ ಅತ್ಯುತ್ತಮ ಘಟಕ ಪ್ರಶಸ್ತಿ ಮತ್ತು ವಿ.ಬಿ.ಹಳ್ಳೊಳ್ಳಿಯವರಿಗೆ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಖಾದ್ರಿ ನರಸಿಂಹಯ್ಯ, ಯುವಜನಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರಮಾಳ್, ಡಾ.ಎಸ್.ರಮಾನಂದ ಶೆಟ್ಟಿ ಈ ಸಂದರ್ಭದಲ್ಲಿದ್ದರು.

Saturday, October 2, 2010

ಶ್ರೀಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘ ಪ್ರಗತಿಯತ್ತ ಸಾಗಿದೆ,

ತೇರದಾಳ ೨೯-೦೯-೨೦೧೦

ಹಿರಿಯರ ಮಾರ್ಗದರ್ಶನದಲ್ಲಿ ಬ್ಯಾಂಕಿನ ಪ್ರಗತಿಗೆ ಸಿದ್ದ-ಸವದಿ



ತೇರದಾಳದ ಎಮ್ ವಿಪಿ ಐಟಿಸಿಯಲ್ಲಿ ಜರುಗಿದ ಶ್ರೀಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸಂಘದ ಅಧ್ಯಕ್ಶ ಧನಪಾಲ ಸವದಿ ಉತ್ತರಿಸುತ್ತಿರುವುದು.
            ಶ್ರೀಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘ ಪ್ರಗತಿಯತ್ತ ಸಾಗಿದೆ, ಉಪಾಧ್ಯಕ್ಶರು.ಸರ್ವಸದಸ್ಯರು ನೀಡುತ್ತಿರುವ ಸಹಕಾರದಿಂದ ಬ್ಯಾಂಕ್ ನೂತನ ಕಟ್ಟಡ ಹೊಂದಲಿರುವದು ಸಂತಸದಾಯಕವಾಗಿದೆ.ಹಿರಿಯರಮಾರ್ಗದರ್ಶನದಲ್ಲಿ
ಪ್ರ್ಗತಿಗೆ ಸದಾಕಾಲ ಕಾಯ್ ಮಾಡುತ್ತಿರುವುದಾಗಿ ಸಂಘದ ಅಧ್ಯಕ್ಶ ಧನಪಾಲ ಸವದಿ ಇಂದಿಲ್ಲಿ ಹೇಳಿದರು.
           ಇಲ್ಲಿಯ ವಿನಾಯಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸರ್ವ ಸಾದಾರಣ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಸಾಧಕ ಬಾಧಕಗಳನ್ನು ಗಮನಿಸಿ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು.ಸಂಘಕ್ಕೆ ಬರಬೇಕಾದ ಬಾಕಿ ಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವದೆಂದು ಭರವಸೆ ನೀಡಿದರು.

ಸಭೆಯಲ್ಲಿ ಬಡ್ಡಿದರ ಏರಿಕೆ,ಸಾಲ ವಸೂಲಿ ಬಗ್ಗೆ ಬಿರುಸಿನ ಚರ್ಚೆಗಳಾದವು.
ಹಿರಿಯರಾದ ವಿರುಪಾಕ್ಷಪ್ಪ ಖವಾಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನೇಕಾರರ ಸಹಕಾರಿ ಸಂಘದ ಉಪಾಧ್ಯಕ್ಷ ಶಿವಪ್ಪ ಖವಾಸಿ.ಎಮ್.ಎಮ್. ಜೈನರ್. ನಿರಿಂಜನ ಪಟ್ಟಣಶೆಟ್ಟಿ.ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಪ್ಪಣ್ಣ ದಾನಿಗೊಂಡ. ಪ್ರವೀಣ ಪಿ.ನಾಡಗೌಡ, ಬಾಲಚಂದ್ರ ಯಾದವಾಡ, ಬಸವರಾಜ ಹಂಜಿ, ಮಹಾವೀರ ಕೋರಿಗೇರಿ, ಉಪಾಧ್ಯಕ್ಷ ರಮೇಶ ಪಟ್ಟಣಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಮಹಾವೀರ ಚವಜ ಬ್ಯಾಂಕಿನ ವಾರ್ಷಿಕ ವರದಿ ವಾಚಿಸಿದರು. ೧೩೪೩ಸದಸ್ಯರನ್ನೊಳಗೊಂಡ ಸಂಘ, ೧,೩೫,೮೮,೫೩೯ರೂ.ಗಳಷ್ಟು ಠೇವಣಿ ಹೊಂದಿದೆಯೆಂದರು. ೭೮೮೪೨೩೯ರೂ.ಗಳ ಸಾಲ ವಿತರಿಸಲಾಗಿದೆ. ೨೦೦೯-೧೦ನೇ ಸಾಲಿನಲ್ಲಿ ಸಂಘ ೧,೦೨,೧೪೨(೧.೨ಲಕ್ಷ ರೂಗಳಷ್ಟು) ಲಾಭ ಗಳಿಸಿದೆಯೆಂದು ವಿವರಿಸಿದರು.

ಸಂಘದ ಅಧ್ಯಕ್ಷ ಧನಪಾಲ ಸವದಿ ಆರಂಭದಲ್ಲಿ ಸ್ವಾಗತಿಸಿದರು. ಪ್ರಗತಿಪರ ರೈತ ಮಲ್ಲಿನಾಥ ಬೋಳಗೊಂಡ ವಂದಿಸಿದರು.

Test

Test 1