Thursday, December 6, 2012

Agni Duranta

ದ್ವೇಷಕ್ಕೆ ಗುಡಿಸಲಿಗೆ ಬೆಂಕಿ-ದನಕರುಗಳ ಸಾವು, ಲಕ್ಷಾಂತರ ರೂಗಳಷ್ಟು ಹಾನಿ















ತೇರದಾಳ : ಸುನೀತಾ ಮತ್ತು ಪ್ರಕಾಶ ಎಂಬುವವರು ಓಡಿ ಹೋಗಿದ್ದರಿಂದ ಅವರ ಎರೆಡು ಮನೆಯವರ ಮಧ್ಯೆ ದ್ವೇಷದಿಂದಾಗಿ ಪರಪ್ಪ ಯಮನಪ್ಪ ಸಾವಳಗಿ ಎಂಬುವವರ ಗುಡಿಸಲುಗಳು, ದನಕರುಗಳು ಬಲಿಯಾದ ಘಟನೆ ನಡೆದ ಬಗ್ಗೆ ಪೊಲೀಸರಿಂದ ಇಂದು ಮಾಹಿತಿ ದೊರಕಿದೆ. ಈ ಕುರಿತು ಪಿಎಸ್ಐ ಸುಂದರೇಶ ಹೊಳೆಣ್ಣವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪರಪ್ಪ ಯಮನಪ್ಪ ಸಾವಳಗಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು ಅದರ ವಿವರ ಇಂತಿದೆ. ದೂರು ನೀಡಿರುವ ಪರಪ್ಪ ನಿನ್ನೆ ಮದ್ಯಾನ್ಹ ಊಟ ಮುಗಿಸಿ ಹೊರಗಡೆ ಬಂದಾಗ ತಮ್ಮ ಮನೆ ಹತ್ತಿರದ ಗುಡಿಸಲಿಗೆ ಬೆಂಕಿ ಹಚ್ಚಿ ಮನಬಂದಂತೆ ಚೀರಾಡಿ, ಕೂಗಾಡಿ, ಕೇ ಕೇ ಹಾಕುತ್ತಿದ್ದ ಬಸಪ್ಪ ಶಂಕರೆಪ್ಪ ಸಾವಳಗಿ, ಪ್ರಕಾಶ ಶಂಕರೆಪ್ಪ ಸಾವಳಗಿ, ಮಲ್ಲಪ್ಪ ಶಂಕರೆಪ್ಪ ಸಾವಳಗಿ ಇವರನ್ನು ಹಿಡಿಯಲು ಹೋದರೆ ಅವರು ಕಬ್ಬಿನ ಪಡದಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ.
  ಪಿರ್ಯಾದಿದಾರರು ಮತ್ತು ಆರೋಪಿತರು ಸಂಬಂಧಿಕರಾಗಿದ್ದು, ಸುನಿತಾ(19), ಪ್ರಕಾಶ (21) ಓಡಿ ಹೋಗಿದ್ದರಿಂದ ಅವರ ಮನೆಯವ ಮಧ್ಯೆ ದ್ವೇಷದಿಂದಾಗಿ ಈ ಘಟನೆ ಸಂಭವಿಸಿದೆಯೆನ್ನಲಾಗಿದೆ.
ಈ ಘಟನೆಯಲ್ಲಿ ಗರ್ಭಧರಿಸಿದ ಜರ್ಸಿ ಆಕಳು, 4ಎಮ್ಮೆ, ಟಗರು, ಮೇಕೆ, ಎಮ್ಮೆ ಕರು, ಆಕಳ ಕರು ಸುಟ್ಟು ಸತ್ತಿವೆ. 4ಗೊಂಜಾಳ ಚೀಲ, 3ಗೋದಿ ಚೀಲ ಕಾಳುಕಡಿ ಸುಟ್ಟಿದ್ದರಿಂದ ಒಟ್ಟು 1ಕ್ಷ 70ಸಾವಿರ ರೂ. (1,70,000 ರೂ.)ಗಳಷ್ಟು ಹಾನಿ ಸಂಭವಿಸಿದೆಯೆಂದು ಪೊಲೀಸರಿಗೆ ದೂರು ನೀಡಲಾಗಿದೆ.

ರಂಗನಗೌಡ ಪಾಟೀಲ ಭೇಟಿ : ಅವಳಿ ಜಿಲ್ಲಾ ಕೆಎಂಎಫ್ ನಿದರ್ೇಶಕ ರಂಗನಗೌಡ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇಂತಹ ಘಟನೆಗಳು ಸಂಭವಿಸಿದಾಗ ಸರಕಾರದಿಂದ ನೆರವು ದೊರೆಯಬೇಕೆಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ನಿಂಗಪ್ಪ ತೇಜನ್ನವರ, ಅಶೋಕ ಸಾವಳಗಿ, ಸಂಜು ಖವಾಸಿ ಈ ಸಂದರ್ಭದಲ್ಲಿದ್ದರು. 
 



Wednesday, December 5, 2012

ಅಕ್ರಮವಾಗಿ ಗರಸು, ಮಣ್ಣು ಸಾಗಾಣಿಕೆ- ನಾಗರಿಕರ ಆರೋಪ










ತೇರದಾಳ : ಇಲ್ಲಿಯ ಅರಣ್ಯಪ್ರದೇಶದ ಗುಡ್ಡದಲ್ಲಿ ಅಧಿಕಾರಿಗಳ ಅಜಾಗರೂಕತೆಯಿಂದಾಗಿ ಅಕ್ರಮವಾಗಿ, ಗರಸು ಸಹಿತ ಮಣ್ಣುನ್ನು ಜೆಸಿಬಿಯಿಂದ ಟ್ಯಾಕ್ಟರ್ ಮತ್ತು ಟಿಪ್ಪರಗಳಲ್ಲಿ ತುಂಬಿಕೊಂಡು ಬೇರೆ ಕಡೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಅಕ್ರಮ ಸರಬರಾಜು ತಡೆಗಟ್ಟುವವರ್ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಈ ಕುರಿತು ನಗರದ ಚಿಕ್ಕಪ್ಪ ಹೊಸಮನಿ, ಸಂಜು ಅಥಣಿ, ಕೇದಾರಿ ಪಾಟೀಲ, ತುಳಜಪ್ಪ ಕುಂಚನೂರ, ದುಂಡಪ್ಪ ಭಂಗಿ ಅಧಿಕಾರಿಗಳಿಗೆ ಪತ್ರ ಬರೆದು ಅಕ್ರಮವಾಗಿ ಸಾಗಿಸುತ್ತಿರುವ ಕಲ್ಲು, ಮಣ್ಣು, ಗರಸು ಸಾಗಾಟವನ್ನು ತಡೆಗಟ್ಟಲು ಆಗ್ರಹಿಸಿದ್ದಾರೆ.
ಹಾಡುಹಗಲೇ ತೇರದಾಳ ಗುಡ್ಡದ ಪ್ರದೇಶದಲ್ಲಿ ಅಕ್ರಮವಾಗಿ ಆರು ಜೆಸಿಬಿ, ನಾಲ್ಲವತ್ತು ಟ್ಯಾಕ್ಟರ್, ಇಪ್ಪತ್ತು ಟಿಪ್ಪರ್ಗಳು ಗುರಸು ಸಾಗಿಸುತ್ತಿದ್ದವು.  ಈ ಸಾಗಿಸುತ್ತಿರುವ ಒಂದು ಸ್ಥಳದಲ್ಲಿ ಅರಣ್ಯಾಧಿಕಾರಿ ಕೂಡ ಇದ್ದರೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿರಬಹುದೆಂದು ಶಂಕಿಸಲಾಗಿದೆಂದು ನಾಗರಿಕರು ದೂರಿನಲ್ಲಿ ತಿಳಿಸಿದ್ದಾರೆ. 

Thursday, November 29, 2012

Time to celebrate: Hipp Hipp Hurre

In Terdal Streets crosses 10,000 hits. Never ever thought of crossing over sea. But Terdal news is crossing over sea and the blog which carries it has crossed Ten Thousand hits. Be connected to your all loving blog In Terdal Streets (terdalnews.blogspot.in). 


On this occassion I would like to introduce Appu Nasi who created  "Namma Terdal" blog has redesigned  "In Terdal Streets" and also merged "Namma Terdal" with the "In Terdal Streets" that means both blogs will be maintained jointly by our news team. 

Let me Introduce Our News Reporting Team which at present includes
Manoj Yadwad.
B. D. Hiremetri. (Reporter Samyukta Karnatak)
M. K. Megadi (Reporter Vijay Vani )
Irappa Balikai.(Reporter Hosadiganta)
Arun Yadwad.(Reporter Vijaya Karnatak)

Our Designing Team
Appu. Nasi.
Manoj. B. Yadwad
On this occassion one more blog: 

Terdal Market  


http://terdalmarket.blogspot.com 

Want to Sell, Want to buy. One point solution. Place your add at Terdal Market and get noticed. 

Monday, November 19, 2012

ತೇರದಾಳದಲ್ಲಿ ಅಲ್ಲಮಪ್ರಭುದೇವರ ಪಲ್ಲಕ್ಕಿ ಉತ್ಸವ-ಸಾಮೂಹಿಕ ರುದ್ರಾಭಿಷೇಕ






ತೇರದಾಳದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಪಾಲಕಿ ಹಾಗೂ ನಂದಿಕೋಲು ಉತ್ಸವ, ದೇವಕನ್ಯೆಯರ ಗಾಯನ, ಝಾಂಝ ಪಥಕದ ಕುಣಿತ ವಿಜೃಂಭಣೆಯಿಂದ ಜರುಗಿತು.



















ತೇರದಾಳ: ತರಕಾರಿ ಹಿಡಿದು, ದಿನಸಿ ವಸ್ತುಗಳೆಲ್ಲವೂ ಗಗನಕ್ಕೇರಿ, ಅಬ್ಬಾ ! ಪೇಟೆ ಧಾರಣೆ ಎನ್ನುತ್ತಲೇ ಈ ವರ್ಷ ದೀಪಾವಳಿ ಹಬ್ಬವನ್ನು ಸ್ವಾಗತಿಸುವ ಮೂಲಕ ಪಟ್ಟಣದ ಜನತೆ ಕಡೇಪಾಡ್ಯವರೆಗೂ ಆಚರಿಸಬೇಕಾಯಿತು. 
ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ದೀಪಾವಳಿ ಪರ್ವದಲ್ಲಿ ತೇರದಾಳ ಪಟ್ಟಣದ ಜನತೆ ಮಿಂದು ನಲಿಯಿತು. ಸದ್ಭಕ್ತರ ಉಪವಾಸ, ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಪಾಲಕಿ ಮತ್ತು ನಂದಿಕೋಲುಗಳ ಉತ್ಸವ, ಅಭಿಷೇಕ, ಸಾಮೂಹಿಕ ಮಂತ್ರಪಠಣ, ನೆರವೇರಿತು. 
ಶ್ರೀಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಪ್ರಾತಃಕಾಲ ಜಾಗಟೆ, ನಗಾರಿ, ತಾಳ, ಸಂಭಾಳವಾದನದೊಂದಿಗೆ ವಿಶೇಷ ಪೂಜೆ ನಡೆಯಿತು. ನಂತರ ಪಟ್ಟಣದಲ್ಲಿ ಹೂಗಳಿಂದಲಂಕೃತ ಪಾಲಕಿಯಲ್ಲಿ ಶ್ರೀಪ್ರಭು ಉತ್ಸವ, ನಂದಿಕೋಲು ಉತ್ಸವ ವಿಜೃಂಭಣೆಯಿಂದ ಜರುಗಿತು. 
ವಿಜಯಮಹಾಂತ ನಾಡಗೌಡ, ಪ್ರವೀಣ ಪಿ.ನಾಡಗೌಡ ಕುಟುಂಬ ವರ್ಗದವರು, ಅರ್ಚಕರು, ಪುರಭಾಧ್ಯಕ್ಷ ಸುರೇಶ ಮುದಕನ್ನವರ(ತಳ್ಳಿ), ಶ್ರೀಅಲ್ಲಮಪ್ರಭು ಝಾಂಝ ಪಥಕದವರು, ಸಂಬಾಳ, ಕರಡಿ ಮಜಲಿನ ವಿವಿಧ ಕಲಾವಿದರು, ದೇವಕನ್ಯೆಯರು ಗಾಯನದೊಂದಿಗೆ, ವಚನಪಠಣದೊಂದಿಗೆ ಕಲಾವಿದರು, ಸದ್ಭಕ್ತರು, ಬೃಹನ್ಮಠದ ಅರ್ಚಕವೃಂದ ಉತ್ಸವದಲ್ಲಿ ಭಾಗವಹಿಸಿದ್ದರು.
ಶ್ರೀಅಲ್ಲಮಪ್ರಭುದೇವರ ದೇವಸ್ಥಾನದಿಂದ ಆರಂಭಗೊಂಡ ಪಾಲಕಿ ಉತ್ಸವ ಸಿದ್ಧೇಶ್ವರ ಗಲ್ಲಿ, ಜವಳಿ ಬಜಾರ, ಪೇಠಭಾಗ, ನಡುಚೌಕಿ, ಶ್ರೀಅಲ್ಲಮಪ್ರಭುದೇವರ ಅಗಸಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐತಿಹಾಸಿಕ ದೇಸಾರರ ಬಾಂವಿಗೆ ಆಗಮಿಸಿ ಮುಕ್ತಾಯ ಗೊಂಡಿತು.

ಗಮನ ಸೆಳೆದ ಸಾಮೂಹಿಕ ರುದ್ರಾಭೀಷೇಕ : ದೇವಸ್ಥಾನಗಳಲ್ಲಿ ನೂರು, ಇನ್ನೂರು ರೂ.ಗಳನ್ನು ಕೊಟ್ಟರೇ ಸದ್ಭಕ್ತರ ಹೆಸರಿನಲ್ಲಿ ರುದ್ರಾಭಿಷೇಕ ಮಾಡುವುದನ್ನು ಕಾಣುತ್ತೇವೆ. ಆದರೆ ಹೊರಾಂಗಣದಲ್ಲಿ ಎಲ್ಲರಿಗೂ ಕಾಣುವಂತೆ ಮಂತ್ರೋಚ್ಛಾರ ಕೇಳುವಂತೆ ನಡೆಸಿಕೊಡುವ ಸಾಮೂಹಿಕ ಅಭಿಷೇಕ ಶತಶತಮಾನಗಳಿಂದಲೂ ಯಾವುದೇ ಅಡೆತಡೆಗಳಿಲ್ಲದೇ ಪ್ರತಿವರ್ಷ ನಡೆಯುವುದನ್ನು ನೋಡಬೇಕು!!
ತೇರದಾಳದಲ್ಲಿ ಪ್ರತಿವರ್ಷದಂತೆ ದೀಪಾವಳಿ ಕಡೇಪಾಡ್ಯೆಯಂದು ಸಂಜೆ ನಡೆಯುವ ಸಾಮೂಹಿಕ ರುದ್ರಾಭಿಷೇಕ ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಸಾರರ ಬಾವಿಯಲ್ಲಿ ನೆರವೇರಿತು. ಶ್ರೀಅಲ್ಲಮಪ್ರಭುದೇವರ ದೇವಸ್ಥಾನದ ಎಲ್ಲ ಅರ್ಚಕರಿಂದ ಸಾಮೂಹಿಕ ರುದ್ರಾಭಿಷೇಕ, ಸಾಮೂಹಿಕ ಮಂತ್ರಪಠಣವು ಸೇರಿದ ಭಕ್ತಜನತೆಯಲ್ಲಿ ಭಕ್ತಿಭಾವ ಮೂಡಿಸಿತು. ಪಟ್ಟಣದ ನಾಡಗೌಡ ಕುಟುಂಬವರ್ಗದವರು ರುದ್ರಾಭಿಷೇಕ ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಸೇರಿದ ಸದ್ಭಕ್ತರು ವೀಕ್ಷಿಸಿದರು.
ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಬಗ್ಗೆ ಜನತೆ ಹೊಂದಿರುವ ಶೃದ್ಧಾ ಭಕ್ತಿಗೆ ಸಾಕ್ಷಿಯಾಗಿ ಬಾಳೆಹಣ್ಣು, ತುಪ್ಪ, ಹಾಲು, ಸಕ್ಕರೆ, ಜೇನುತುಪ್ಪವನ್ನು ದೇಸಾರರ ಬಾವಿ ಮೇಲೆ ಸದ್ಭಕ್ತರಿಂದ ಸಂಗ್ರಹಿಸಲಾಗುತ್ತದೆ. ಸಂಜೆ ಹೊತ್ತಿಗೆ ಉತ್ಸವ ಆಗಮಿಸಿದ ನಂತರ ಅರ್ಚಕರು ನಡೆಸಿಕೊಡುವ  ಸಾಮೂಹಿಕ ರುದ್ರಾಭಿಷೇಕ, ಮಂತ್ರೋಚ್ಛಾರ ಸಹಸ್ರ-ಸಹಸ್ರ ಸಂಖ್ಯೆಯ ಜನರ ಗಮನ ಸೆಳೆಯುತ್ತದೆ. ಯಾವುದೇ ಬೇಧ-ಭಾವದಿಂದ ಎಲ್ಲರೂ ನೋಡುವ ಈ ರುದ್ರಾಭೀಷೇಕ ಈ ಭಾಗದಲ್ಲಿಯೇ ಪ್ರಸಿದ್ಧಿಯಾಗಿದೆ.
 ಪ್ರತಿವರ್ಷದಂತೆ ಇಲ್ಲಿಯ ಸಮಸ್ಥ ಜನತೆ ದೀಪಾವಳಿ ಕಡೇಪಾಡ್ಯವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದರ್ಶನ ಪಡೆದರು. ರುದ್ರಾಭಿಷೇಕ ಹಾನಿಯಾಗದಂತೆ ದೊಡ್ಡದಾದ ತೆಪೇಲಿಗಳಲ್ಲಿ ಸಂಗ್ರಹಿಸಿ ಲಿಂಗದೇವರ ಕಟ್ಟೆಗೆ ದರ್ಶನಕ್ಕೆ ಬರುವ ಸದ್ಭಕ್ತರಿಗೆ ಯುವಕರು, ಹಿರಿಯರು ರಾತ್ರಿಯಿಡೀ ವಿತರಿಸಿದರು. ಸೋಮವಾರ ಬೆಳಗಿನಜಾವ ಮತ್ತೆ ಪಲ್ಲಕ್ಕಿ ಉತ್ಸವ ಆರಂಭಗೊಂಡು ಶ್ರೀಅಲ್ಲಮಪ್ರಭುದೇವರ ದೇವಸ್ಥಾನಕ್ಕೆ ಮರಳಿತು. ರವಿವಾರ ರಾತ್ರಿ ಶ್ರೀಪ್ರಭುಲಿಂಗೇಶ್ವರ ಭಜನಾ ಮಂಡಳಿಯವರು ಭಕ್ತಿಸಂಗೀತ ನಡೆಸಿಕೊಟ್ಟರು.


Saturday, November 17, 2012

ಮೌಲ್ಯ ಬೆಳೆಸಿಕೊಳ್ಳಲು ಉತ್ತಮ ಪುಸ್ತಕ ಓದಿ-ಕುಲಕರ್ಣಿ

ತೇರದಾಳದ ಸರಕಾರಿ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಎಂಬ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮದಲ್ಲಿ ಪ್ರಕಾಶರಾವ್ ಕುಲಕರ್ಣಿ ಮಾತನಾಡಿದರು.


ತೇರದಾಳ : ಇಂದಿನ ಟಿ.ವಿ.ಕಂಪ್ಯೂಟರ್ ಯುಗದಲ್ಲಿ ಓದುವ ಹವ್ಯಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಎಂಬ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವದು ಸ್ವಾಗತಾರ್ಹ. ಮಕ್ಕಳು ಶಾಲಾ ಗ್ರಂಥಾಲಯದಲ್ಲಿರುವ ಮೌಲ್ಯಯುತ ಪುಸ್ತಕಗಳ ಜ್ಞಾನ ಪಡೆದು, ಮೌಲ್ಯಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕೆಂದು ದೂರ ಸಂಪರ್ಕ ಇಲಾಖೆಯ ಪ್ರಕಾಶರಾವ್ ಕುಲಕರ್ಣಿ  ಕರೆಯಿತ್ತರು.
ಇಲ್ಲಿಯ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರವಿ ಗುಮ್ಮನ್ನವರ. ಅಪ್ಪು ಮಂಗಸೂಳಿ ಅತಿಥಿಗಳಾಗಿ ಆಗಮಿಸಿದ್ದರು.
ಜಿ.ಎಂ.ಮೋಪಗಾರ ಸ್ವಾಗತಿಸಿ, ನಿರೂಪಿಸಿದರು. ಪಿ.ಎ.ಬುರ್ಶಿ  ವಂದಿಸಿದರು.


ಪುಸ್ತಕ ಜೋಳಿಗೆ 





ಈ ಕಾರ್ಯಕ್ರಮದಂಗವಾಗಿ ಶಾಲೆಯ ಎಲ್ಲ ಮಕ್ಕಳು ಶಾಲಾ ಸಿಬ್ಬಂದಿಯೊಂದಿಗೆ ಪಟ್ಟಣದ ಮನೆ ಮನೆಗಳಿಗೆ ತೆರಳಿ 50ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಸಂಗ್ರಹಿಸಿದರು.



ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಕಾರ್ಯಕ್ರಮದ  ಅಂಗವಾಗಿ ಶ್ರೀ ಪ್ರಭುಲಿಂಗ ಪದವಿಪುಉರ್ವ ಮಹಾವಿದ್ಯಾಲಯದ ಶಾಲಾ ಮಕ್ಕಳು ಹಾಗು ಸಿಬ್ಬಂದಿಗಳು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿದರು. 






ಶ್ರೀ ಸಿದ್ದೆಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ತಗೆಯಿರಿ ಪುಸ್ತಕ ಹೊರಗೆ -ಹಚ್ಚಿರಿ ಜ್ಞಾನದ ದೀವಿಗೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ|| ಆರ್ . ಬಿ. ಕಾಲತಿಪ್ಪಿ  ಮಾತನಾಡಿದರು

Test

Test 1