Sunday, September 5, 2010

ಶಾಂತಿ ಸೌಹಾರ್ಧತೆಯಿಂದ ಜಾತ್ರೆ, ರಮಜಾನ್ ಹಬ್ಬ ಆಚರಿಸಲು ಕರೆ

ತೇರದಾಳ:

ತೇರದಾಳದ ಪೋಲಿಸ್ ಠಾಣೆಯಲ್ಲಿ ನಡೆದ ಜಾತ್ರೆ, ರಮಜಾನ್ ಹಬ್ಬದ ಶಾಂತಿ ಸಭೆಯನ್ನುದ್ಧೇಶಿಸಿ ಪಿಎಸ್‍ಐ ಆರ್.ಆರ್.ಪಾಟಿಲ ಮಾತನಾಡಿದರು.
ಪಟ್ಟಣದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ಪೊಲೀಸರೊಂದಿಗೆ ನಾಗರಿಕರು ಸಹಕರಿಸಬೇಕು. ಯಾವುದೇ ಧರ್ಮದ ಹಬ್ಬವೇ ಇರಲಿ, ಜಾತ್ರೆಯೇ ಇರಲಿ ಸಾರ್ವಜನಿಕರು ಕೋಮು ಸಾಮರಸ್ಯದೊಂದಿಗೆ, ಸಹಕಾರದೊಂದಿಗೆ ಹಬ್ಬಗಳನ್ನು ಆಚರಿಸಿದಾಗ ಅದಕ್ಕೊಂದು ಮಹತ್ವ ಬರುವದೆಂದು ಪಿಎಸ್‍ಐ ಆರ್.ಆರ್.ಪಾಟೀಲ ಇಂದಿಲ್ಲಿ ಹೇಳಿದರು.

ಪುರಸಭಾಧ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸಿದ್ದರು.

ಪ್ರವೀಣ ಪಿ. ನಾಡಗೌಡ, ಆನಂದ ನಡುವಿನಕೇರಿ, ಬಸವರಾಜ ಬಾಳಿಕಾಯಿ, ಮಲ್ಲು ತುಬಚಿ, ಪುರಸಭಾಸದಸ್ಯ ಅಜೀತ ಮಗದುಮ್, ನೇಮಣ್ಣ ಸಾವಂತನವರ್, ಅಪ್ಪಾಸಾಬ ಆಲಗೂರ, ಜಿಲಾಣಿ ಜಮಾದಾರ್ ಮಾತನಾಡಿದರು.

1 comment:

  1. you are a different person in terdal, if you decide to good changes in terdal definately it wil happen. my support is always with you.

    ReplyDelete

Test

Test 1