Wednesday, December 5, 2012

ಅಕ್ರಮವಾಗಿ ಗರಸು, ಮಣ್ಣು ಸಾಗಾಣಿಕೆ- ನಾಗರಿಕರ ಆರೋಪ










ತೇರದಾಳ : ಇಲ್ಲಿಯ ಅರಣ್ಯಪ್ರದೇಶದ ಗುಡ್ಡದಲ್ಲಿ ಅಧಿಕಾರಿಗಳ ಅಜಾಗರೂಕತೆಯಿಂದಾಗಿ ಅಕ್ರಮವಾಗಿ, ಗರಸು ಸಹಿತ ಮಣ್ಣುನ್ನು ಜೆಸಿಬಿಯಿಂದ ಟ್ಯಾಕ್ಟರ್ ಮತ್ತು ಟಿಪ್ಪರಗಳಲ್ಲಿ ತುಂಬಿಕೊಂಡು ಬೇರೆ ಕಡೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಅಕ್ರಮ ಸರಬರಾಜು ತಡೆಗಟ್ಟುವವರ್ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಈ ಕುರಿತು ನಗರದ ಚಿಕ್ಕಪ್ಪ ಹೊಸಮನಿ, ಸಂಜು ಅಥಣಿ, ಕೇದಾರಿ ಪಾಟೀಲ, ತುಳಜಪ್ಪ ಕುಂಚನೂರ, ದುಂಡಪ್ಪ ಭಂಗಿ ಅಧಿಕಾರಿಗಳಿಗೆ ಪತ್ರ ಬರೆದು ಅಕ್ರಮವಾಗಿ ಸಾಗಿಸುತ್ತಿರುವ ಕಲ್ಲು, ಮಣ್ಣು, ಗರಸು ಸಾಗಾಟವನ್ನು ತಡೆಗಟ್ಟಲು ಆಗ್ರಹಿಸಿದ್ದಾರೆ.
ಹಾಡುಹಗಲೇ ತೇರದಾಳ ಗುಡ್ಡದ ಪ್ರದೇಶದಲ್ಲಿ ಅಕ್ರಮವಾಗಿ ಆರು ಜೆಸಿಬಿ, ನಾಲ್ಲವತ್ತು ಟ್ಯಾಕ್ಟರ್, ಇಪ್ಪತ್ತು ಟಿಪ್ಪರ್ಗಳು ಗುರಸು ಸಾಗಿಸುತ್ತಿದ್ದವು.  ಈ ಸಾಗಿಸುತ್ತಿರುವ ಒಂದು ಸ್ಥಳದಲ್ಲಿ ಅರಣ್ಯಾಧಿಕಾರಿ ಕೂಡ ಇದ್ದರೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿರಬಹುದೆಂದು ಶಂಕಿಸಲಾಗಿದೆಂದು ನಾಗರಿಕರು ದೂರಿನಲ್ಲಿ ತಿಳಿಸಿದ್ದಾರೆ. 

No comments:

Post a Comment

Test

Test 1