Friday, October 8, 2010

ತುಳಜಾಭವಾನಿ ಮೂರ್ತಿ ಪ್ರತಿಷ್ಠಾಪನೆ ೧೦ ರಂದು

Terdal 06-10-2010

ತೇರದಾಳ,೬- ಪಟ್ಟಣದಲ್ಲಿ ಶ್ರೀತುಳಜಾಭವಾನಿ ಮೂರ್ತಿ ಪ್ರತಿಷ್ಠಾಪನೆಗೆ ಗಣಪತಿ ಗಲ್ಲಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆಯೆಂದು ಸಂಘಟಕರು, ಹಿರಿಯರು ತಿಳಿಸಿದ್ದಾರೆ.
ರವಿವಾರ ದಿ. ೧೦ರಂದು ಸಾಯಂಕಾಲ ೪ಗಂಟೆಗೆ ನೂತನ ಶ್ರೀತುಳಜಾಭವಾನಿ ಮೂರ್ತಿ ಮೆರವಣಿಗೆಯು ದತ್ತ ಮಂಗಲ ಕಾರ್ಯಾಲಯದಿಂದ ಆರಂಭಗೊಂಳ್ಳುವುದು. ಮಾತೆಯರು ಕುಂಭ ಆರತಿಯೊಂದಿಗೆ ಪಾಲ್ಗೊಂಡರೆ, ಸಕಲ ವಾದ್ಯವೃಂದದ ಕಲಾವಿದರು, ಪಟ್ಟಣದ ಗಣ್ಯಮಾನ್ಯರು, ಹಿರಿಯರು, ಸದ್ಬಕ್ತರು ಭಾಗವಹಿಸಲಿದ್ದಾರೆ.
ಸೋಮವಾರ ದಿ.೧೦ರಂದು ಮುಂಜಾನೆ ೮-೩೦ಕ್ಕೆ ಜಮಖಂಡಿ ಮುತ್ತಿನಕಂತಿಮಠದ ಶ್ರೀಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮೂರ್ತಿ ಪ್ರತಿಷ್ಠಾಪಿಸುವರು.
ನಂತರ ೧೧ಗಂಟೆಗೆ ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಸ್ವಾಮಿಗಳ ಸಾನಿಧ್ಯದಲ್ಲಿ ಸಮಾರಂಭ ಜರುಗುವದು. ಶೇಗುಣಸಿ ವಿರಕ್ತಮಠದ ಉತ್ತರಾಧಿಕಾರಿ ಶ್ರೀಮಹಾಂತ ದೇವರು ನೇತ್ರತ್ವದಲ್ಲಿ ಸ್ಥಳೀಯ ಶಾಸಕ ಸಿದ್ದು ಸವದಿ ಸಮಾರಂಭ ಉದ್ಘಾಟಿಸುವರು. ಪುರಸಭೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸುವರು. ಸಕಲ್ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ, ಧನದಿಂದ ಸೇವೆಗೈಯಲು ಸಂಘಟಕರು ಕೋರಿದ್ದಾರೆ.

No comments:

Post a Comment

Test

Test 1