Tuesday, October 12, 2010

ಕಣ್ಮರೆಯಾದ ಮಗನಿಗಾಗಿ ಹೆತ್ತವರ ಹುಡುಕಾಟ;

Terdal : 08-10-2010



ತೇರದಾಳ. ೮-ಸ್ಠಳೀಯ್ ಪೋಲೀಸ್ ಠಾಣೆ ವ್ಯಾಪ್ತಿಗೆ ಬರುವ ರಬಕವಿಯ ಸಾಗರ ಮಹಾಲಿಂಗಪ್ಪ ಮುತ್ತೂರ (೨೩) ಎಂಬ ಯುವಕ ಆಗಸ್ಟ್ ೧೪ರಿಂದ ಕಾಣೆಯಾಗಿದ್ದಾನೆಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ಇಂದು ದಾಖಲಾಗಿದೆ.

ಬೆಳಗಾವಿ ಕೆ.ಎಲ್.ಇ ಕಾಲೇಜಿನಲ್ಲಿ ಬಿ.ಇ.ಸಿವಿಲ್ ವ್ಯಾಸಂಗ ಮಾಡುತ್ತಿದ್ದ ಸಾಗರ ಮಾನಸಿಕವಾಗಿ ಅಸ್ವಸ್ಥನಲ್ಲ. ಆರೋಗ್ಯಪೂರ್ಣನೂ ಆಗಿದ್ದಾನೆ. ಆದರೆ ಆತ ಮನೆಯಿಂದ ಯಾವ ಉದ್ದೇಶಕ್ಕಾಗಿ ಹೋದ ಎಂಬುದು ತಿಳಿದಿಲ್ಲವೆಂದು ಮನೆಯವರು ಹೇಳುತ್ತಿದ್ದಾರೆ. ಎಲ್ಲ ಕಡೆಗೆ ಹುಡುಕಾಡಿದರೂ ಸಿಗದಿದ್ದಾಗ, ಸಾಗರನ ಪಾಲಕರು ಇದೀಗ ಪೋಲೀಸರ ಮೊರೆ ಹೋಗಿದ್ದಾರೆ.

ಮನೆ ಬಿಟ್ಟು ಹೋಗುವಾಗ ಕರಿ ಬಣ್ಣದ ಪ್ಯಾಂಟ್. ಬಿಳಿ ಅಂಗಿ ಧರಿಸಿದ್ದನು. ೫ಫೂ,೧೦ಇಂ, ಎತ್ತರ, ಕನ್ನಡ, ಹಿಂದಿ. ಇಂಗ್ಲೀಷ ಮಾತನಾಡಬಲ್ಲ. ತೆಳ್ಳಗಿನ ಮೈಕಟ್ಟು ಹೊಂದಿರುವ ಈತ ಗೋದಿಗೆಂಪು ಬಣ್ಣ ಹೊಂದಿದ್ದಾನೆ, ಈತನ ಸುಳಿವು ಸಿಕ್ಕವರು ಕೊಡಲೇ (೦೮೩೫೩) ೨೫೫೧೩೩ಗೆ ಇಲ್ಲವೆ, ಆರ್, ಆರ್, ಪಾಟೀಲ ಠಾಣಾಧಿಕಾರಿ ೯೪೮೦೮೦೩೯೫೯ಗೆ ಸಂಪರ್ಕಿಸಲು ಪೋಲಿಸರು ಕೋರಿದ್ದಾರೆ.

No comments:

Post a Comment

Test

Test 1