Thursday, October 14, 2010

ಧಾರ್ಮಿಕ ಪ್ರಜ್ಞೆ. ಸತ್ಸಂಗದ ಮಹತ್ವ ಅರಿಯಲು ಕರೆ

Terdal 10-10-2010

ತೇರದಾಳ.೧೦-ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಪ್ರಜ್ಞೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ತರುಣ ಮಂಡಳಿ ಕಳೆದ ೧೩ವರ್ಷಗಳಿಂದ ಆದಿಶಕ್ತಿಯ ಮೂರ್ತಿ ಪ್ರತಿಷ್ಠಾಪಿಸಿ ಜನಜಾಗೃತಿ ಕಾರ್ಯಕ್ರಮ ಸಂಘಟಿಸುತ್ತಿರುವದು ಶ್ಲಾಘಾನೀಯವೆಂದು ವಲಯ ಕಸಾಪ ಅಧ್ಯಕ್ಷ ಮ, ಕೃ. ಮೇಗಾಡಿ ಹೇಳಿದರು.

ಇಲ್ಲಿಯ ಕಲ್ಲಟ್ಟಿಯ ಶ್ರೀಆದಿಶಕ್ತಿ ತರುಣ ಮಂಡಳಿಯವರು ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಆದಿಶಕ್ತಿಯ ದಿವ್ಯಪ್ರಭಾವದಿಂದ ನಾಡು ಸುಖ-ಶಾಂತಿ-ನೆಮ್ಮದಿ ಕಾಣಲೆಂದು ಹಾರೈಸಿದರು.
ಹಿರಿಯರಾದ ರುದ್ರಪ್ಪಣ್ಣ ವಂಟಗುಡಿ ಅಧ್ಯಕ್ಷತೆ ವಹಿಸಿದ್ದರು.

ಆದಿಶಕ್ತಿಯ ಪುರಾಣ ಪ್ರವಚಣವನ್ನು ಬುರ್ಲಟ್ಟಿಯ ಶಿವಶಂಕರ ಬಡಿಗೇರ ಶರಣರು ನಡೆಸಿಕೊಟ್ಟು ಬದುಕು ಹಸನಾಗಲು ಸನ್ಮಾರ್ಗದತ್ತ ನಡಿಗೆ ಇರಬೇಕೆಂದರು.
ರಾಮಣ್ಣ ಹೊಸಮನಿ. ಪ್ರಭುರಾಯ ಬಜಂತ್ರಿ. ಪಾಂಡು ಹುದ್ದಾರ. ನಾಗರಾಜ ಮುದಕನ್ನವರ. ಅಪ್ಪಾಸಿ ಹೊಸಮನಿ. ಉಮ್ಮಣ್ಣ ರಾವಳ. ಅಲ್ಲಪ್ಪ ಖವಾಸಿ ಉಪಸ್ಥಿತರಿದ್ದರು.
ನಿರಂಜನ ಬಡಿಗೇರ. ಸತ್ಯಪ್ಪ ದಾಸರ ಪ್ರಾರ್ಥಿಸಿದರು. ಅಲ್ಲಪ್ಪ ಇಂಗಳಗಿ ಸ್ವಾಗತಿಸಿದರು. ಸಿದ್ದು ಅಥಣಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಯ್ಯ ಬೃಂಗಿ ಮಂಗಲ ಗೀತೆ ಹಾಡಿದರು.

No comments:

Post a Comment

Test

Test 1