Tuesday, August 31, 2010

ಅನ್ನಪೂರ್ಣಾ. ಗು. ಮುಚ್ಚಂಡಿಯವರಿಂದ ಅನ್ನ ಪ್ರಸಾದ ಸಮಿತಿಗೆ 25,000 ರೂ.ಗಳ ದೇಣಿಗೆ

ತೇರದಾಳ: ೩೧-೦೮-೨೦೧೦

ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩

ತೇರದಾಳದ ಶ್ರೀಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮಿತಿ ಅಧ್ಯಕ್ಷ ’ಸಿದ್ದು ಮಹಾಕಾಳಿ’ಯವರಿಗೆ ’ಅನ್ನಪೂರ್ಣಾ ಗು.ಮುಚ್ಚಂಡಿ’ ೨೫ ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರು. ಗದಗ ಅಕ್ಕಮಹಾದೇವಿಯವರು ಚಿತ್ರದಲ್ಲಿದ್ದಾರೆ.
     ಇಲ್ಲಿಯ ಶ್ರೀಅಲ್ಲಮಪ್ರಭು ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿರುವ ಪ್ರಭುಲಿಂಗಲೀಲೆ ಪ್ರವಚನದಲ್ಲಿ ಶ್ರೀಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮಿತಿಗೆ ೨೫ಸಾವಿರ ರೂ.ಗಳ ದೇಣಿಗೆ ನೀಡಿದ ಅನ್ನಪೂರ್ಣ ಗು. ಮುಚ್ಚಂಡಿಯವರನ್ನು ಸತ್ಕರಿಸಿ ಆಶೀರ್ವಚನ ನೀಡುತ್ತ ಯಾವುದೋ ಕೆಲಸಕ್ಕೆ ಅನವಶ್ಯಕ ಖರ್ಚು ಮಾವುವುದಕ್ಕಿಂತ ಉದಾರ ಗುಣ ಬೆಳೆಸಿಕೊಳ್ಳಬೇಕು. ದಾನ ಮಾಡುವ ಭಾವನೆ ಪುಣ್ಯವಂತರಿಗೆ ಮಾತ್ರ ಲಭಿಸುವದು. ಉದಾರ ದಾನಿಗಳು ಸಿಗುವುದೇ ಅಪರೂಪವೆಂದು ಹೇಳಿದರು.
     ಪ್ರಸಾದ ಸಮಿತಿಯ ಸಿದ್ದು ಮಹಾಕಾಳಿ ದೇಣಿಗೆಯನ್ನು ಸ್ವೀಕರಿಸಿ ದಾನಿಗಳಿಗೆ ಅಭಿನಂದಿಸಿದರು. ಲಗಮನ್ನ ಮಿರ್ಜಿ, ಲಕ್ಷ್ಮಣ ಯಡವಣ್ಣವರ, ಶ್ರೀಶೈಲ ಮೇಗಾವಿ, ಸಿದ್ದಪ್ಪ ಗುಡ್ಡಿ, ರ‍್ಯಾವಪ್ಪ ತುಕ್ಕನ್ನವರ, ದತ್ತು ರಜಪುತ, ಕಮಲಕ್ಕ ವಾಲಿ, ಮಲ್ಲಯ್ಯ ಬೃಂಗಿ ಈ ಸಂದರ್ಭದಲ್ಲಿದ್ದರು.
      ಮೌಲಾ ಮೋಮಿನ್ ಪ್ರಾರ್ಥಿಸಿದರು. ಶಿಕ್ಷಕ ಮ.ಕೃ.ಮೇಗಾಡಿ ನಿರೂಪಿಸಿದರು. ಎಮ್.ಸಿ. ಕುಂಚಗನೂರ ವಂದಿಸಿದರು.

No comments:

Post a Comment

Test

Test 1