Saturday, August 28, 2010

Raita Sangaha Prathibhatane

         ಭಾವಚಿತ್ರವುಳ್ಳ ಪಡಿತರ ಚೀಟಿ ಪಟ್ಟಣದಲ್ಲೇ ನೀಡಬೇಕು, ಹಾಗೂ ಆಹಾರ ಧಾನ್ಯ, ಸೀಮೆ ಎಣ್ಣೆಯನ್ನು ಸಮರ್ಪಕವಾಗಿ ವಿತರಿಸಬೇಕು, ಅನಿಲ ಹೊಂದಿದ ಪಡಿತರದಾರರಿಗೆ ಕನಿಷ್ಠ ೨ ಲೀಟರ ಸೀಮೆ ಎಣ್ಣೆ ವಿತರಿಸಬೇಕೆಂದು ಆಗ್ರಹಿಸಿ ಸ್ಥಳೀಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ಪಟ್ಟಣದಲ್ಲಿ ಶನಿವಾರ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

       ಕಾಂಗ್ರೆಸ ನಾಯಕಿ ಉಮಾಶ್ರೀ ಪ್ರತಿಭಟನೆ ಸ್ಥಳಕ್ಕೆ ಅನಿರೀಕ್ಷಿತವಾಗಿ ಬಂದ್ದಿದ್ದು ಎಲ್ಲರನ್ನು ಅಚ್ಚರಿ ಮೂಡಿಸಿತು. ಉಮಾಶ್ರೀ ಆಗಮನದಿಂದ ಪ್ರತಿಭಟನಾಕಾರರಿಗೆ ಮತ್ತಷ್ಟು ಪುಷ್ಠಿ ಬಂದಿತ್ತು. ಸಾರ್ವಜನಿಕರ  ಸಮಸ್ಯೆ ಆಲಿಸಿದ ಅವ್ರು ಆಹಾರ ನಿರೀಕ್ಷಕ ಖಾತೆದಾರರನ್ನು ತರಾಟೆಗೆ ತೆಗೆದುಕೊಂಡರು.

      ಕೊನೆಗೆ ಉಪತಹಸೀಲ್ದಾರ ಡಿ.ಆಯ್. ಹೆಗ್ಗೊಂಡ ಅವರಿಗೆ ಮನವಿ ಅರ್ಪಿಸಲಾಯಿತು. ಗಿರಿಮಲ್ಲಪ್ಪ ಕೊಕಟನೂರ. ಅಪ್ಪಾಸಾಬ ಆಲಗೂರ. ಯಮನಪ್ಪ ಹುದ್ದಾರ, ಬರಮಪ್ಪ ಸವದಿ. ಪರಸಪ್ಪ ಗಾಡದಿ, ಅಬ್ದುಲ್ ನದಾಪ. ಶ್ರೀಮಂತ ಮದುಮಲಿ. ಸೇರಿದಂತೆ ಹಲವರು ಇದ್ದರು.

Congress Leader Umashri With other Raita Sangha Leaders giving memorandum to Asst. Tahshildar D. I. Heggonda 
Raita Sangha Leader Mrutyunjay addressing to public
People preparing food on road to protest against late araival of Food Inspector

No comments:

Post a Comment

Test

Test 1