Tuesday, August 31, 2010

ಜಾಡಾರ ಓಣಿಯಲ್ಲಿರುವ ಶ್ರೀ ಅಲ್ಲಮಪ್ರಭು ದೇವಸ್ಥಾನದಲ್ಲಿ ಶಾಸಕರಿಗೆ ಸನ್ಮಾನ

ತೇರದಾಳ: ಶುಕ್ರವಾರ ೨೭-೦೮-೨೦೧೦

ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩

ತೇರದಾಳ ಕಿಲ್ಲಾಭಾಗ ಜಾಡರ ಓಣಿಯಲ್ಲಿರುವ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಶುಕ್ರವಾರ ಚಾವಡಿ ಸರ್ಕಲ್, ಕಿಲ್ಲಾಭಾಗ ಜಾಡರ ಓಣಿಯಲ್ಲಿರುವ ಶ್ರೀ ಅಲ್ಲಮಪ್ರಭು ದೇವಸ್ಥಾನ ಹಾಗೂ ನೇಕಾರ ಬಾಂದವರ ಪರವಾಗಿ ಶಾಸಕ ಸಿದ್ದು ಸವದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷ್ಣಾ ಮೇಗಾಡಿ, ಚನ್ನಪ್ಪ ಚರೂಟಿ, ಉಸ್ಮಾಣ ಥರಥರಿ, ಶ್ರೀಶೈಲ ಮೇಗಾಡಿ, ಪರಪ್ಪ ತೊದಲಬಾಗಿ, ಶಂಕರ ಕಲ್ಲೊಳ್ಳಿ ಚಿತ್ರದಲ್ಲಿದ್ದಾರೆ.
   ಸನ್ಮಾನ ಸ್ವಿಕರಿಸುತ್ತಾ ಈ ದೇವಸ್ಥಾನಕ್ಕೆ ಶಾಸಕರ ನಿಧಿ ಅಲ್ಲದೇ ಸಂಸದರ ನಿಧಿಯಿಂದಲೂ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುವ ಭರವಸೆಯನ್ನಿತ್ತರು.


"ಅಭಿವೃದ್ದಿ ಕೆಲಸಗಳಿಗೆ ನಾಗರಿಕರ ಸಹಕಾರ ಅಗತ್ಯ"- ಸವದಿ
     ಪಟ್ಟಣದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನಿಡಲಾಗಿದ್ದು, ಗುಣಮಟ್ಟದ ಕೆಲಸಗಳಿಗೂ ಗಮನ ನಿಡಲಾಗುವುದು, ಅಭಿವೃದ್ದಿ ಕೆಲಸಗಳಿಗೆ ಅಡತಡೆಯಾಗದಂತೆ ನಾಗರಿಕರು ಸಹಕರಿಸಬೇಕು. ಕಳಪೆ ಕಾಮಗಾರಿ ಮಾಡಿದವರ ವಿರುದ್ದ ಕ್ರಮಕೈಗೊಳ್ಳಲೂ ಹಿಂದೇಟು ಹಾಕುವುದಿಲ್ಲವೆಂದು ಶಾಸಕ ಸಿದ್ದು ಸವದಿ ಇಂದಿಲ್ಲಿ ಎಚ್ಚರಿಸಿದರು.

     ಪುರಸಭೆ ನೂತನ ಅದ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ, ಪಟ್ಟಣದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಪುರಸಭೆಯಿಂದ ಹೆಚ್ಚಿನ ನೆರವು ಒದಗಿಸಲಾಗುವದೆಂದರು.

   ಪುರಸಭೆ ಉಪಾಧ್ಯಕ್ಷೆ ಶಾಲವ್ವ ವಿಠ್ಠಲ ಮಾಂಗ, ಮುಖ್ಯಾಧಿಕಾರಿ ಗೋಪಾಲ ಕಾಸೆಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಪುರಸಭೆ ಸದಸ್ಯರಾದ ರಮೇಶ ಕಿತ್ತೂರ, ಉಸ್ಮಾನ ಥರಥರಿ, ಇಸಾಕ ಮೋಮಿನ್, ಟಿ.ಎ.ಪಿ.ಸಿ.ಎಮ್.ಎಸ್. ಅಧ್ಯಕ್ಷ ಷಣ್ಮುಖ ಗಾಡದಿ, ಪುರಸಭಾ ಮಾಜಿ ಅಧ್ಯಕ್ಷ ನಿಂಗಪ್ಪಣ್ಣ ಮಾಲಗಾಂವಿ, ಸುರೇಶ ರೇಣಕೆ ಇನ್ನಿರರು ಉಪಸ್ಥಿತರಿದ್ದರು.

No comments:

Post a Comment

Test

Test 1