Saturday, March 29, 2014

Thursday, March 27, 2014

ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಗೆಲುವಿಗೆ ಶ್ರಮಿಸಲು ಗದ್ದಿಗೌಡರ ಕರೆ



ತೇರದಾಳದ ಇಮ್ರಾನ್ ನದಾಫ ಅವರ ತೋಟದಲ್ಲಿ ಬುಧವಾರ ನಡೆದ ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು.


ತೇರದಾಳದ ಇಮ್ರಾನ್ ನದಾಫ ಅವರ ತೋಟದಲ್ಲಿ ಬುಧವಾರ ನಡೆದ ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿದರು.


ಬುಧವಾರ ತೇರದಾಳಕ್ಕೆ ಆಗಮಿಸಿದ ಬಿಜೆಪಿ ಅಭ್ಯಥರ್ಿ ಪಿ.ಸಿ.ಗದ್ದಿಗೌಡರ ಹಾಗೂ ಮಾಜಿ ಶಾಸಕ ಸಿದ್ದು ಸವದಿಯವರು ಡಾ.ಬಿ.ಆರ್.ಅಂಬೇಡ್ಕರ್ರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


ತೇರದಾಳ : ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಮುಂದಿನ ಪ್ರಧಾನಿ ನರೇಂದ್ರ ಮೋದಿಯವರಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಮತದಾರರಿಗೆ ಸರಿಯಾಗಿ ತಿಳುವಳಿಕೆ ನೀಡುವ ಮೂಲಕ ಪಕ್ಷದ ಗೆಲುವಿಗೆ ಬದ್ಧರಾಗಬೇಕೆಂದು ಬಾಗಲಕೋಟ ಲೋಕಸಭಾ ಬಿಜೆಪಿ ಅಭ್ಯಥರ್ಿ ಪಿ.ಸಿ.ಗದ್ದಿಗೌಡರ ಹೇಳಿದರು.
ಇಲ್ಲಿಯ ಇಮ್ರಾನ್ ನದಾಫ ಅವರ ತೋಟದಲ್ಲಿ ನಡೆದ ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು ಕಾರ್ಯಕರ್ತರ ಸಮಸ್ಯೆಗಳಿಗೆ, ಜನಪರ ಕಾರ್ಯಗಳಿಗೆ ಸದಾ ಸ್ಪಂಧಿಸಲಾಗುವುದೆಂದರು.
ಮಾಜಿ ಶಾಸಕ ಸಿದ್ದು ಸವದಿ ಮಾತನಾಡಿ ದೇಶದ ಅಭಿವೃದ್ಧಿಗಾಗಿ, ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಪಕ್ಷದ ಕಾರ್ಯಕರ್ತರು ದುಡಿಯಬೇಕೆಂದು ಕರೆಯಿತ್ತರು.
ಸ್ಥಳೀಯ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೇ ತಮಗೆ ಸಾಕಷ್ಟು ತೊಂದರೆಗಳಾಗಿದ್ದರೂ, ಆದ ನೋವುಗಳನ್ನೆಲ್ಲ ಮರೆತು ಮೋದಿಯವರಿಗಾಗಿ ಬಿಜೆಪಿ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಬೇಕು ಬೇಡಿಕೆಗಳಿಗೆ ನೇರವಾಗಿ ಸಂಪಕರ್ಿಸಲಾಗುವುದೆಂದರು.
ಬಸಪ್ಪ ಮುಕರಿ, ನ್ಯಾಯವಾದ ವಿನೋದ ಪತ್ತಾರ, ಇಮ್ರಾನ ನದಾಫ, ಸುರೇಶ ತಳ್ಳಿ, ಸುರೇಶ ಅಕಿವಾಟ, ಅಲ್ಲಯ್ಯ ದೊಡಮನಿ, ಸತ್ಯಪ್ಪ ಮಹಿಷವಾಡಗಿ, ರಾಜು ಮುಕ್ಶಟ್ಟಿ, ಇಬ್ರಾಹಿಮ್ ಹನಗಂಡಿ, ಈಶ್ವರ ಕಾಡದೇವರ, ಶಂಕರ ಹೊಸಮನಿ ಪಾಲ್ಗೊಂಡಿದ್ದರು.
ಮಲಾಬಾದಿ ಸ್ವಾಗತಿಸಿ, ನಿರೂಪಿಸಿದರು. ರಾಜು ಸರಿಕರ ವಂದಿಸಿದರು. ತೇರದಾಳ, ರಬಕವಿ-ಬನಹಟ್ಟಿ, ಬಿಸನಾಳ, ಮದಬಾಂವಿ, ಕೆಸರಗೊಪ್ಪ ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.


Wednesday, March 26, 2014

Terdal KJP meets BJP in front of P C Gaddigoudar




KJP MLA Candidate made a come back with his followers in BJP and made a appeal to P.C. Gaddigoudar. that his party workers should be well treated as they all have sacrificed their life in building BJP from the ground level. 

While P C Gaddigoudar assured all the party workers that they will be well treated and work unitedly with everybody without any discrimination. And in future days appropriate positions will be given to KJP party workers.

Talking on this occasion Ex MLA Siddu Savadi said that if you have any differences with me solve it in personally while this election we should fight unitedly as it is matter of Nation...

Friday, April 12, 2013

ತೇರದಾಳ ಮತದಾನ ವಾಮಾಚಾರದಿಂದ ಮುಕ್ತವಾಗಿರಲೆಂದು ಹಾರೈಸಿ ಶ್ರೀ ಅಲ್ಲಮಪ್ರಭುದೇವರಲ್ಲಿ ಪೂಜೆ.



ತೇರದಾಳ: ರಾಜಕೀಯದಲ್ಲಿ ಅಧಿಕಾರದ ಗದ್ದುಗೆ ಏರಲು ಅಭ್ಯರ್ಥಿಗಳು ಪೂಜೆ-ಪುನಸ್ಕಾರ, ಹೋಮ-ಹವನ, ಇಷ್ಟಕ್ಕೆ ಮನಸ್ಸು ತೃಪ್ತವಾಗದಿದರೆ ವಾಮಾಚಾರದ ಮಾರ್ಗವು ಹಿಡಿಯುತ್ತಾರೆ. ಇಂತಹ ಅನಿಷ್ಟಗಳು ತೇರದಾಳ ಮತಕ್ಷೇತ್ರದ ಜನರ ಮೇಲೆ ಪ್ರಭಾವ ಬೀಳಬಾರದು ಎಂದು ಡಾ|| ಎಂ. ಎಸ್. ದಾನಿಗೊಂಡ, ಅಜಿತ ಮಗದುಮ, ಮಹಾವೀರ ಕುಳ್ಳಿ, ಸುರೇಶ ಬಾಬಗೊಂಡ, ಹರೀಶ ಕುಲಕರ್ಣಿ, ಮತ್ತಿತರರು ಶ್ರೀ ಅಲ್ಲಮ ಪ್ರಭು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 

Thursday, April 11, 2013

ಸ್ವಾಭಿಮಾನಕ್ಕಾಗಿ ಸಂಘರ್ಶ - ತೇರದಾಳ ಮತಕ್ಷೆತ್ರದಿಂದ ಕಾಂಗ್ರೇಸ್ಸಿನ ಬಂಡಾಯ ಅಭ್ಯರ್ಥಿ


ತೇರದಾಳ: ತೇರದಾಳ ಮತಕ್ಷೆತ್ರದಲ್ಲಿ ಪ್ರಬಲ ಪಕ್ಷವಾಗಿರುವ ಕಾಂಗ್ರೇಸ್ ತೇರದಾಳ ಮತಕ್ಷೆತ್ರವನ್ನು ಪ್ರತಿನಿಧಿಸಲು ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕೊಡದೆ ಅನ್ಯಾಯ ಮಾಡುತಿದ್ದಾರೆ. ಮತ್ತು ಇದರ ವಿರುದ್ಧ ಸ್ಥಳಿಯ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯ ಕರ್ತರು ಇದಕ್ಕೆ ದಿಟ್ಟ ಉತ್ತರ ನೀಡುವುದಕ್ಕಾಗಿ ಈ ಬಾರಿಯ ವಿಧನಸಭಾ ಚುನಾವನೆಯಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕೆ  ಇಳಿಸಲು ನಿರ್ಧರಿಸಿದ್ದಾರೆ ಎಂದು ಡಾ|| ಎಂ. ಎಸ್. ದಾನಿಗೊಂಡ ತಿಳಿಸಿದ್ದಾರೆ. 

Thursday, February 21, 2013

Test

Test 1