Sunday, September 4, 2011

Unemployment : Even America under trouble.

Job Growth Grinds to a Halt

September 3, 2011

The U.S. economy slammed into a wall in August, failing to add any jobs for the first time in nearly a year and ratcheting up pressure on President Barack Obama to find a way to kick-start the sputtering recovery.

By Sudeep Reddy

Every Indian must read this artical.

India Says No to $80 Toilet Paper :This is a link to an artical published in 'WALL STREET JOURNAL' USA.

Sunday, August 21, 2011

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Terdal 21-08-2011

ತೇರದಾಳ ಭಗ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ‍್ಯಕ್ರಮದಲ್ಲಿ ಕೃಷ್ಣನ ವೇಷದಾರಿ ಧರಿಸಿದ ಚಿಣ್ಣರು.




ಪಟ್ಟಣದ ಭಾಗ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶಾಲಾ ಪಾಲಕರು ತಮ್ಮ ತಮ್ಮ ಪುಠಾಣಿ ಮಕ್ಕಳನ್ನು ಕೃಷ್ಣನ ವೇಷದಾರಿ ಹಾಕಿ ಸಂಭ್ರಮಪಟ್ಟರು. ಶಾಲೆಯಲ್ಲಿ ತೊಟ್ಟಿಲು ಕಾರ‍್ಯಕ್ರಮ ನಡೆಸಲಾಯಿತು. ಆಕರ್ಷಣೆಯ ವೇಷ ಧರಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. (ಪ್ರಥಮ) ಸಮರ್ಥ ಶೇಗುಣಸಿ, ಸೃಷ್ಠಿ ಹಾದಿಮನಿ. (ದ್ವಿತೀಯ) ಓಂಕಾರ ಬಾಳಿಕಾಯಿ, ಸಂಜೀವಿನಿ ಪತ್ತಾರ. (ತೃತಿಯ) ಭೂಷಣ ಸಪ್ತಸಾಗರ, ಸಹನಾ ಅಥಣಿ ವಿಜೇತ ಚಿಣ್ಣರು. ಸಂಸ್ಥೆಯ ಅಧ್ಯಕ್ಷ ನಾರಾಯಣ ಪತ್ತಾರ, ವಿನೋದ ಪತ್ತಾರ, ಶಿವಾನಂದ ಚಿಂಚಲಿ, ಸದಾಶಿವ ಕೊಡತೆ, ಶಿಲ್ಪಾ ಶೆಟ್ಟಿ, ರಾಜೇಶ್ವರಿ ಜಮಖಂಡಿಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.




Tuesday, August 9, 2011

ಆತ್ಮಹತ್ಯೆ ಬೇಡ



ಅಂತರಜಾಲಾಡಿ

ಆತ್ಮಹತ್ಯೆ ಬೇಡ

ಖಿನ್ನತೆ ಒಂದು ಬಹುಸಾಮಾನ್ಯ ಖಾಯಿಲೆ. ಇದು ಹೆಚ್ಚಾಗಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರಿಗೆ ಇಂತಹ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡೇ ಬಿಡುತ್ತಾರೆ. ಇಂತಹವರಿಗೆ ಆಪ್ತಸಲಹೆ ಅತಿ ಮುಖ್ಯ. ಅತ್ಮೀಯರಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಸಹಾಯವಾಣಿ ಇದೆ. ಅಂತರಜಾಲತಾಣವೂ ಇದೆ. ಅಂತಹ ಒಂದು ಜಾಲತಾಣ www.aasra.info. ನಿಮ್ಮ ಪರಿಚಯದವರು ಯಾರಾದರೂ ನಿಮ್ಮಲ್ಲಿ ಆಗಾಗ “ಈ ಜೀವನ ಸಾಕಾಗಿದೆ. ಸಾಯೋಣ ಅನ್ನಿಸುತ್ತಿದೆ” ಎಂದೆಲ್ಲ ಗಳಹುತ್ತಿದ್ದರೆ ಅವರಿಗೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ

-- ಗಣಕಿಂಡಿ - ೧೧೬ (ಆಗಸ್ಟ್ ೦೮, ೨೦೧೧)





Sunday, July 24, 2011

Android Handset ಬಳಕೆದಾರರಿಗೆ ವಿಶೇಷ ಸುಚನೆ

ನಿವು ಈಗ ನಿಮ್ಮ Android ಮೊಬೖಲ್್ನಲ್ಲಿ ಕನ್ನಡ ಒದು ಹಾಗೂ ಬರೆಯಬಹುದು. ನಾನು ಈ ಬ್ಲಾಗ್ ಸದ್ಯ. ನನ್ನ Samsung galaxy 5 ನಿಂದ ಟೖಪಮಾ ಡಿದ್ದು. ಹಚ್ಚಿನ ಮಾಹಿತಿಗಾಗಿ ಮಂಬರುವ ಪೊಸ್ಟಗಳನ್ನು ವಿಕ್ಷಿಸಿ.

Wednesday, July 20, 2011

ರೈತರಿಂದ ಉಗ್ರ ಹೋರಾಟದ ಎಚ್ಚರಿಕೆ.

Terdal 20-07-2011
ಈ ಸುದ್ದಿಯ ಪ್ರಾಯೊ ಜಕರು


ತೇರದಾಳ: ಜಮಖಂಡಿ ತಾಲೂಕಿನ ತೇರದಾಳ ಸಮೀಪದ ತಮದಡ್ಡಿ ಗ್ರಾಮವು ಪ್ರತಿವರ್ಷವಾಗುವ ಮುಂಗಾರು ಮಳೆಯಿಂದ ಹಿಪ್ಪರಗಿ ಆಣೆಕಟ್ಟಿನಿಂದಾಗಿ ಮುಳುಗಡೆಯಾಗುತ್ತದೆ. ಹಳಿಂಗಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮವನ್ನು ಸ್ಥಳಾಂತರಿಸಲು ದಿ: 01-06-2006 ರಂದು ಗ್ರಾ.ಪಂ. ಅಧ್ಯಕ್ಷ & ಉಪಾಧ್ಯಕ್ಷರ ನೇತೃತ್ವದಲ್ಲಿ ಠರಾವು ಪಾಸ್‍ ಮಾಡಲಾಗಿತ್ತು. ಆಣೆಕಟ್ಟಿನ ಹಿನ್ನೀರಿನಿಂದಾಗಿ ಗ್ರಾಮದ ಜನತೆ ಮಲೇರಿಯಾ & ಮತ್ತು ಇನ್ನಿತರ ರೋಗಗಳಿಗೆ ತುತ್ತಾಗುತ್ತಿದ್ದಾರು. ಈ ನಿಟ್ಟಿನಲ್ಲಿ ಗ್ರಾಮವನ್ನು ಸ್ಥಳಾಂತರಿಸಲು ೨೦೦೬ ರಲ್ಲಿ ಸ್ಥಳಿಯ ಶಾಸಕರಾದ ಮಾನ್ಯ ಶ್ರೀ ಸಿದ್ದು. ಕ. ಸವದಿಯವರಿಗೆ ಮನವಿ ನೀಡಲಾಯಿತು. ಈಗ ಸರಕಾರವು ತಮದಡ್ಡಿ ಗ್ರಾಮದ ಪುನರ್ವಸತಿ ಕೇಂದ್ರ ಸ್ಥಾಪಿಸಲು ಸ್ಥಳೀಯ ಬಡರೈತರ ಫಲವತ್ತಾದ ಜಮೀನನ್ನು ಸ್ವಾಧೀನ ಪವಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಪ್ರಕ್ರಿಯೆಯಿಂದ ಬಡರೈತರು ಆತಂಕಗೊಂಡಿದ್ದು ಕೂಡಲೇ ಈ ಪ್ರಕ್ರಿಯೆ ನಿಲ್ಲಿಸಿ ಸರಕಾರದ ಜಾಗದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಈಗ ಸರಕಾರವು ಸ್ವಾಧೀನ ಪಡಿಸಿಕೊಳ್ಳಲು ಹೊರಟ ಜಮೀನು ಕಡುಬಡವರದ್ದಾಗಿದ್ದು, ಸರಕಾರದ ಈ ನಿರ್ಧಾರದಿಂದಾಗಿ ಅವರ ಉಪಜೀವನ ಮತ್ತು ದನಕರುಗಳು ಜೀವಿಸಲು ಸಾಧ್ಯವಾಗುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಎಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ತನ್ನ ಈ ಉದ್ಧಟತನ ಮುಂದುವರೆಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳಿಯ ರೈತರು ಎಚ್ಚರಿಕೆ ನೀಡಿದ್ದಾರೆ.



Test

Test 1